ಕರ್ನಾಟಕ ಲಲಿತಕಲಾ ಅಕಾಡೆಮಿಯ 51ಮತ್ತು 52ನೆಯ ವಾರ್ಷಿಕ ಕಲಾಪ್ರದರ್ಶನ. ಈ ಪ್ರದರ್ಶನದಲ್ಲಿ ಸಹಜವಾಗಿ ರೇಖಾಚಿತ್ರ , ವರ್ಣಚಿತ್ರ, ಛಾಯಾಚಿತ್ರ, ಪ್ರಿಂಟ್ ಗಳಿರುವುದು ಸಹಜವೇ ಆಗಿದೆ. ಆದರೆ ಶಿಲ್ಪಕಲೆಯ , ಬಹುತೇಕ ಮುಂದಿನ ಬೆಳವಣಿಗೆ ಎಂದು ಹೇಳಬಹುದಾದ ಇನ್ಸ್ಟಾಲೇಷನ್ ಗಳನ್ನೂ, ಅಚ್ಚರಿಎಂಬಂತೆ ಶಿಲ್ಪ ವನ್ನೂ ( ‘ಬಾಳದೋಣಿ ‘ ಮಿಶ್ರ ಮಾಧ್ಯಮ, ಹರೀಶ್ ಕೊಡಿಯಾಲಬೈಲ್ ) ಪ್ರದರ್ಶಿಸಿರುವುದು ಅಚ್ಚರಿಯನ್ನುoಟುಮಾಡಿತು.” ಚಿತ್ರಕಲಾ ಅಕಾಡೆಮಿ ” ಎಂದು ಹೆಸರನ್ನು ಬದಲಿಸಲು ಸರ್ಕಾರಕ್ಕೆ ಅಕಾಡೆಮಿಯು ಮೊನ್ನೆ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ಪ್ರದರ್ಶನದಲ್ಲಿ ಈ ಕೃತಿಗಳು ಇದ್ದವು ! ಈ ಅಭಿವ್ಯಕ್ತಿಗಳು ಶಿಲ್ಪಿಕಲಾ ಅಕಾಡೆಮಿಯ ಪ್ರದರ್ಶನಕ್ಕೆ ಹೊಂದಿಕೊಳ್ಳಬಲ್ಲವು.
–KV Subramanyam